ವರದಿ: ವಿಕಿಲ ಎಸ್. ಹಿರೇಮಠ
ಕಾಗವಾಡ: ಉಗಾರ ಖುರ್ದ ಪಟ್ಟಣದಲ್ಲಿ ಈದ್ ಮಿಲಾದ ಹಬ್ಬದ ಪ್ರಯುಕ್ತ ಗಾಂಧಿಚೌಕ ದರ್ಗಾದಲ್ಲಿರುವ ಮೆಬೂಬ ಉಸ್ತಾನಿ ದರ್ಗಾಕ್ಕೆ ಮುಸ್ಲಿಂ ಯುವಕರಿಂದ ಗಲೀಫ್ ದೇವರಿಗೆ ಅರ್ಪಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ಜಮೀರ ಶೇಖ್ ಇವತ್ತಿನ ದಿನ ಮೊಹಮ್ಮದ್ ಪೈಗಂಬರ್ ಅವರ 1501 ನೇ ಜನ್ಮ ದಿನಾಚರಣೆಯ ಹಬ್ಬದ ಸಂಭ್ರಮವಾದ ಹಿನ್ನಲೆಯಲ್ಲಿ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ನಾಡಿನ ಜನೆತೆಗೆ ಆಯುಷ್ಯ ಆರೋಗ್ಯ ಸಕಲವನ್ನು ಕೊಟ್ಟು ಪೈಗಂಬರ್ ಅವರು ಆಶಿರ್ವಾದವಿರಲಿ ಎಂದು ಕೇಳಿಕೊಳ್ಳುತ್ತಿದ್ದೇವೆ ಎಂದರು.
ಈ ಸಮಯದಲ್ಲಿ ಇಸಮೈಲ್ ಲಾಂಡಗೆ ಮೈನೂದ್ದೀನ್ ನಂದಿವಾಲೆ,ತೋಹಿದ ಲಾಂಡಗೆ, ತೌಶೀಫ್ ಮೈಶಾಳೆ, ಮುಜಮಿಲ್ಲ್ ಸನದಿ, ಜಮೀರ್ ಮುಜಾವರ,ಮುಜಮ್ಮಿಲ್ ಸನದಿ,ಮಹಮ್ದದ್ ಮೋಮಿನ್,ಬಾಬುಜಾನ ನದಾಫ
ಪ್ರಜ್ವಲ್ ಅಸೂದೆ,ಸದ್ದಾಂ ಕಲಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

