Tue. Jul 21st, 2026

ಬೈಕಗಳ ನಡುವೆ ಡಿಕ್ಕಿ: ಓರ್ವ ವ್ಯಕ್ತಿ ಸಾವು

Share this with Friends

ಅಥಣಿ: ಎರಡು ಬೈಕಗಳ ನಡುವೆ ಡಿಕ್ಕಿ‌ ಸಂಭವಿಸಿ ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟು ಮತ್ತೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಪಾರ್ಥನಹಳ್ಳಿ‌ ಗ್ರಾಮದ ಜತ್ತ – ಜಾಂಬೋಟ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ‌ ಬುಧವಾರ ಸಂಜೆ ಸಂಭವಿಸಿದೆ.

ಬಳ್ಳಿಗೇರಿ‌ ಗ್ರಾಮದಮಲ್ಲಯ್ಯ ಮಠಪತಿ(21) ಮೃತಪಟ್ಟ ದುರ್ದೈವಿಯಾಗಿದ್ದಾನೆ. ‌ಇನ್ನೋರ್ವ ವ್ಯಕ್ತಿ ಮಹಾರಾಷ್ಟ್ರದ ವಜ್ರವಾಡ ಗ್ರಾಮದ ಯುವಕನಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಥಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this with Friends

Related Post