Sat. Mar 7th, 2026

ಬಸ್ ಹರಿದು‌ ವೃದ್ಧ ದುರ್ಮರಣ

Share this with Friends

ಹುಣಸೂರು,ಆ.11: ರಸ್ತೆ ದಾಟುತ್ತಿದ್ದ ವೃದ್ದನ ಮೇಲೆ ಕೆಎಸ್ ಆರ್ ಟಿಸಿ ಬಸ್ ಹರಿದು ಆತ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರು ಹುಣಸೂರು ಮುಖ್ಯ ರಸ್ತೆಯ ಬನ್ನಿಕುಪ್ಪೆ ಬಳಿ ಈ ಘಟನೆ ನಡೆದಿದ್ದು,ತಮಿಳುನಾಡು ಮೂಲದ ದೊರೆಸ್ವಾಮಿ(67) ಮೃತಪಟ್ಟಿದ್ದಾರೆ.

ಮಗಳ ಮನೆಗೆ ಬಂದಿದ್ದ ದೊರೆಸ್ವಾಮಿ ಟೀ ಕುಡಿಯಲು ರಸ್ತೆ ದಾಟುತ್ತಿದ್ದಾಗ ಬಸ್ ಢಿಕ್ಕಿ ಹೊಡೆದಿದೆ.

ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡರು.


Share this with Friends

Related Post