Wed. Jul 22nd, 2026

ಸಿಂಹ ಘರ್ಜನೆ ಹಾಡು ಬಿಡುಗಡೆಗೊಳಿಸಿದ ಯದುವೀರ್ ಒಡೆಯರ್

Share this with Friends

ಮೈಸೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 74ನೇ ಹುಟ್ಟು ಹಬ್ಬದ ಪ್ರಯುಕ್ತ ಪಾತಿ ಫಿಲಂಸ್ ವತಿಯಿಂದ ಎಂದಿಗೂ ನಿಲ್ಲದು ಸಿಂಹ ಘರ್ಜನೆ ಹಾಡನ್ನು ಹೊರತಂದಿದ್ದು,ಸಂಸದ ಯದುವೀರ್ ಒಡೆಯರ್ ಬಿಡುಗಡೆಗೊಳಿಸಿದರು.

ಈ ವೇಳೆ ಯದುವೀರ್ ಮಾತನಾಡಿ, ವಿಷ್ಣುವರ್ಧನ್ ರವರು ನಮ್ಮ ಮೈಸೂರಿನವರು ಅವರ ಚಿತ್ರಗಳೆಲ್ಲವೂ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು ಎಂದು ಸ್ಮರಿಸಿದರು.

ವಿಷ್ಣುವರ್ಧನ್ ನೆನಪಿನಲ್ಲಿ ಯುವಕಲಾವಿದರ ಪ್ರತಿಭೆಗೆ ಅವಕಾಶ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವ ಪಾತಿ ಫಿಲಂಸ್ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾತಿ ಫಿಲಂಸ್ ಎಂ.ಡಿ ಪಾರ್ಥಸಾರಥಿ, ನಿರ್ದೇಶಕ ಎಸ್.ಜೆ ಸಂಜಯ್, ಗಾಯಕ ವೈಶಾಖ ಶಶಿಧರ್, ಮಧಾನ್, ಅಜಯ್ ಶಾಸ್ತ್ರೀ, ಯೋಗ ನರಸಿಂಹ ಕೆ ಆರ್ (ಮುರಳಿ),ಟಿ.ಎಸ್ ಅರುಣ್,ಸುಚೇಂದ್ರ, ಚಕ್ರಪಾಣಿ, ಸಂತೋಷ್, ಮಹೇಂದ್ರ ಹಾಗೂ ವಿಷ್ಣು ಅಭಿಮಾನಿಗಳು ಉಪಸ್ಥಿತರಿದ್ದರು.


Share this with Friends

Related Post