ಬೆಂಗಳೂರು: ಸ್ಯಾಂಡಲ್ವುಡ್ನ ‘ಈಶ್ವರ’ ಮತ್ತು ರಾಜಕೀಯದ ‘ಮಹಾಬಲ’ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡರೆ ಹೇಗಿರುತ್ತೆ? ಅಂತಹದೊಂದು ಹೈ-ವೋಲ್ಟೇಜ್ ದೃಶ್ಯಕ್ಕೆ ಶನಿವಾರ ಸಂಜೆ ಸಾಕ್ಷಿಯಾಯಿತು ಬೆಂಗಳೂರಿನ ಹೊಸಕೆರೆಹಳ್ಳಿ.
ಕನಸುಗಾರನ ಹೊಸ ಲೋಕಕ್ಕೆ ಡಿಸಿಎಂ ಭೇಟಿ:
ತಮ್ಮ ಅದ್ಧೂರಿ ಸಿನಿಮಾಗಳ ಮೂಲಕ ಕನ್ನಡಿಗರನ್ನು ಮಾಯಾಲೋಕಕ್ಕೆ ಕರೆದೊಯ್ಯುವ ‘ಕ್ರೇಜಿಸ್ಟಾರ್’ ರವಿಚಂದ್ರನ್, ಇತ್ತೀಚೆಗಷ್ಟೇ ಹೊಸಕೆರೆಹಳ್ಳಿಯ ಇಟ್ಟಮಡು ಬಳಿಯಿರುವ ಟಾಟಾ ಪ್ರಮೋಂಟ್ ಎಂಬ ಐಷಾರಾಮಿ ಅಪಾರ್ಟ್ಮೆಂಟ್ಗೆ ತಮ್ಮ ವಾಸ್ತವ್ಯ ಬದಲಿಸಿದ್ದಾರೆ. ಈ ‘ಕ್ರೇಜಿ ಲೋಕ’ಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತಿಥಿಯಾಗಿ ಆಗಮಿಸಿ ಅಚ್ಚರಿ ಮೂಡಿಸಿದರು.
ಕಾಫಿ ವಿತ್ ಕ್ರೇಜಿಸ್ಟಾರ್:
ರಾಜಾಜಿನಗರದ ನೆನಪುಗಳನ್ನು ಬದಿಗಿಟ್ಟು ಹೊಸ ಗೂಡು ಸೇರಿರುವ ರವಿಚಂದ್ರನ್ ಅವರ ಮನೆಗೆ ಭೇಟಿ ನೀಡಿದ ಡಿಸಿಎಂ, ನಟನಿಗೆ ಶುಭಾಶಯ ಕೋರಿದರು. ಈ ವೇಳೆ ಇಬ್ಬರು ದಿಗ್ಗಜರು ಕಾಫಿ ಕುಡಿಯುತ್ತಾ ಸಿನೆಮಾ, ಸಾಹಿತ್ಯ ಹಾಗೂ ಸದ್ಯದ ವಿದ್ಯಮಾನಗಳ ಬಗ್ಗೆ ಗಹನವಾಗಿ ಚರ್ಚಿಸಿದರು ಎನ್ನಲಾಗಿದೆ. ರವಿಮಾಮನ ಕ್ರೇಜಿ ಶೈಲಿಯ ಇಂಟೀರಿಯರ್ ಡಿಸೈನ್ಗೆ ಡಿಸಿಎಂ ಫಿದಾ ಆಗಿದ್ದಾರಂತೆ!
ಏನಿರಬಹುದು ಈ ಭೇಟಿಯ ಗುಟ್ಟು?
ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿರುವ ಸಮಯದಲ್ಲೇ ಈ ಭೇಟಿ ನಡೆದಿರುವುದು ಗಾಂಧಿನಗರದಿಂದ ವಿಧಾನಸೌಧದವರೆಗೆ ಸಂಚಲನ ಸೃಷ್ಟಿಸಿದೆ. ಇದು ಬರೀ ಸೌಜನ್ಯದ ಭೇಟಿಯೋ ಅಥವಾ ‘ಕನಸುಗಾರ’ನಿಗೆ ಯಾವುದಾದರೂ ವಿಶೇಷ ಜವಾಬ್ದಾರಿಯ ಆಫರ್ ನೀಡಲಾಗಿದೆಯೇ ಎಂಬ ಗಾಸಿಪ್ಗಳು ಈಗಾಗ್ಲೇ ಹರಿದಾಡುತ್ತಿವೆ.
ಒಟ್ಟಿನಲ್ಲಿ, ಬಣ್ಣದ ಲೋಕದ ದೊರೆ ಮತ್ತು ಅಧಿಕಾರದ ಚುಕ್ಕಾಣಿ ಹಿಡಿದ ನಾಯಕನ ಈ ಮಿಲನ ‘ಸೂಪರ್ ಹಿಟ್’ ಫೋಟೋಗಳಿಗೆ ದಾರಿಯಾಗಿದೆ.

