ಬೆಂಗಳೂರು: ಈಗಾಗಲೇ ಡಜನ್ ಗಟ್ಟಲೇ ಎಸ್ ಐಟಿ ರಚನೆ ಮಾಡಿದ್ದು, ಎಸ್ ಐಟಿ ಯಿಂದ ತನಿಖೆ ಸಾಧ್ಯವಿಲ್ಲ ಹಾಗಾಗಿ ಬಳ್ಳಾರಿಯಲ್ಲಿ ನಡೆದ ಗಲಾಟೆಯ ತನಿಖೆಯನ್ನು ಸಿಬಿಐಗೆ ಕೊಡಬೇಕು ಇಲ್ಲಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು. ವರದಿ ಬಂದ ನಂತರ ಸ್ಪೆಷಲ್ ಕೋರ್ಟ್ ನೇಮಿಸಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ ಆಗ್ರಹಿಸಿದ್ದಾರೆ.
ಬಳ್ಳಾರಿ ಘಟನೆ ಕುರಿರು ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದ್ವೇಷ ರಾಜಕಾರಣ ಶುರುವಾಗಿದೆ. ಕಾಂಗ್ರೆಸ್ ಪುಂಡರಿಗೆ ಪೊಲೀಸರ ಭಯ ಇಲ್ಲದಾಗಿದೆ ಪೊಲಿಸ್ ಸ್ಟೇಷನ್ ಹರಾಜಾಗಿದೆ ಪೊಲಿಸರನ್ನು ಹೆದರಿಸುತ್ತ ಕಾಂಗ್ರೆಸ್ ಪುಂಡರು ಮೆರೆಯುತ್ತಿದ್ದಾರೆ. ಇದು ಅತ್ಯಂತ ಖಂಡನೀಯ. ಕೂಡಲೇ ತನಿಖೆ ಆರಂಭ ಆಗಬೆಕು. ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಸುರಕ್ಷತೆಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಬಳ್ಳಾರಿಯಲ್ಲಿ ನಿನ್ನೆ ನಡೆದ ಘಟನೆ ರಾಜಕೀಯ ದ್ವೆಷದಿಂದ ಕೂಡಿದೆ ಹಾಗೂ ವಿರೊಧಿಗಳನ್ನು ದೈಹಿಕವಾಗಿ ಮುಗಿಸಲು ಮಾಡಿರುವ ಸಂಚು. ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ಬಂದು ಗಲಾಟೆ ಮಾಡಿರುವುದು ಕಾಂಗ್ರೆಸ್ ಶಾಸಕರ ಪುಂಡರು ಎನ್ನುವುದು ಸ್ಪಷ್ಟ. ಅಲ್ಲದೇ ಎಂಟು ಗುಂಡು ಅವರ ಮನೆಯ ಮುಂದೆನೇ ಕಾಂಗ್ರೆಸ್ ಶಾಸಕರ ಸೆಕ್ಯುರಿಟಿ ಹಾರಿಸಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿದೆ. ಇಷ್ಟೆಲ್ಲಾ ಆದರೂ ಯಾರ ಗನ್ ನಿಂದ ಗುಂಡು ಹಾರಿದೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಎಸ್ ಐಟಿ ರಚನೆ ಮಾಡುವ ಮಾತನಾಡುತ್ತಿದ್ದಾರೆ ಆದರೆ ಎಸ್ ಐಟಿ ಯಿಂದ ತನಿಖೆ ಸಾಧ್ಯವಿಲ್ಲ. ಇದನ್ನು ಸಿಬಿಐ ಕೊಡಬೇಕು ಇಲ್ಲಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ದ್ವೇಷ ಭಾಷಣ ಮಾಡುವವರ ವಿರುದ್ದ ಕಾನೂನು ತಂದಿರುವ ಕಾಂಗ್ರೆಸ್ ಸರ್ಕಾರ ದ್ವೆಷದಿಂದ ಗುಂಡು ಹಾರಿಸುವ ಅವರ ಶಾಸಕರನ್ನು ಬಂಧಿಸುವ ತಾಕತ್ತು ಸಿಎಂ ಹಾಗೂ ಗೃಹ ಸಚಿವರಿಗೆ ಇದಿಯಾ ಎಂದು ಜನ ಕಾದು ನೋಡುತ್ತಿದ್ದಾರೆ ಎಂದು ಇದೇ ವೇಳೆ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.

