Fri. Apr 11th, 2025

ಮಾಟ ಮಂತ್ರ ಶಂಕೆ:ಯುವಕ‌ ಆತ್ಮಹತ್ಯೆ

Share this with Friends

ಮೈಸೂರು,ಮೇ.3: ಮಾಟ ಮಂತ್ರ ಮಾಡಿಸಿರಬಹುದು ಎಂದು ಆತಂಕಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು,ಮಧುಕರ್(22)ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ.

ಮಧುಕರ್ ತಂದೆ ಮುರಳೀಧರ್ ಅರ್ಚಕರಾಗಿದ್ದು ಪತ್ನಿ ವಿಚ್ಛೇದನ ಪಡೆದ ಕಾರಣ ಮಗ ಮಧುಕರ್ ಜೊತೆ ಗೋಕುಲಂ ನಲ್ಲಿ ವಾಸವಿದ್ದಾರೆ.

ಡಿಪ್ಲೊಮಾ ದಲ್ಲಿ ಫೇಲ್ ಆದ ಮಧುಕರ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.ಹೊರಗೆ ಹೋಗಿದ್ದ ತಂದೆ ಮನೆಗೆ ಹಿಂದಿರುಗಿದಾಗ ಕೊಠಡಿಯಲ್ಲಿ ಮಧುಕರ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಮಾಟ ಮಂತ್ರ ಮಾಡಿಸಿದ್ದಾರೆಂಬ ಭೀತಿಗೆ ಒಳಗಾಗಿದ್ದ ಮಧುಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ಮುರಳಿಧರ್ ವಿವಿ ಪುರಂ ಪೊಲೀಸ್ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ.


Share this with Friends

Related Post