Sun. Mar 8th, 2026

ಪರಪ್ಪನ ಅಗ್ರಹಾರದಿಂದ ಮನೆಗೆ ರೇವಣ್ಣ

Share this with Friends

ಬೆಂಗಳೂರು,ಮೇ.14: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ತೆರಳಿದರು.

ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೇವಣ್ಣ ಅವರು ಜೈಲಿನಿಂದ ಹೊರ ಬಂದರು, ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಮಾಧ್ಯಮಗಳತ್ತ ಕೈ ಮುಗಿದು ಮುಂದೆ ಹಿರಟರು.

ರೇವಣ್ಣ ಜೈಲಿನಿಂದ ಹೊರಗೆ ಬರುವುದನ್ನು ಅಭಿಮಾನಿಗಳು ಜೈಲಿನ ಹೊರಗೆ ಕಾಯುತ್ತಿದ್ದರಿಂದ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಸಂತ್ರಸ್ತೆಯ ಕಿಡ್ನಾಪ್‌ ಆರೋಪ ಎದುರಿಸುತ್ತಿದ್ದ ರೇವಣ್ಣ ಅವರು 6 ದಿನಗಳ ಹಿಂದೆ ಜೈಲು ಸೇರಿದ್ದರು,ನಿನ್ನೆಯೇ ಜಾಮೀನು ಮಂಜೂರಾಗಿತ್ತು.


Share this with Friends

Related Post