Fri. Apr 11th, 2025

ಬೈಕ್ – ಸಾರಿಗೆ ಬಸ್ ಢಿಕ್ಕಿ:ಸವಾರ ಸಾವು

Share this with Friends

ಮೈಸೂರು,ಜೂ.27: ಕೆ.ಎಸ್. ಆರ್.ಟಿ.ಸಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಕಲ್ಲಹಳ್ಳಿ ಗೇಟ್ ಬಳಿ ನಡೆದಿದೆ.

ಪಾಲಹೊಸೂರಿನ ನಿವಾಸಿ ಮಂಜು(25) ಮೃತಪಟ್ಟ ಬೈಕ್ ಸವಾರ.

ಹುಣಸೂರಿನಲ್ಲಿ ಮೆನ್ಸ್ ಪಾರ್ಲರ್ ನಡೆಸುತ್ತಿದ್ದ ಮಂಜು ಪತ್ನಿಯನ್ನ ಭೇಟಿ ಮಾಡಿ ರಾಮನಾಥಪುರದಿಂದ ಬೈಕ್ ನಲ್ಲಿ ಬರುತ್ತಿದ್ದರು

ಈ ವೇಳೆ ಬಸ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿದೆ.ಹುಣಸೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post