ಬೆಂಗಳೂರು, ಜು.16 : ಬೆಂಗಳೂರು ಸಂಚಾರ ವಿಭಾಗದ ನೂತನ ಜಂಟಿ ಆಯುಕ್ತರಾಗಿ ಕಾರ್ತಿಕ್ ರೆಡ್ಡಿ ಇಂದು ಅಧಿಕಾರ ಸ್ವಿಕರಿಸಿದ್ದಾರೆ.
ಮಂಗಳವಾರವಷ್ಟೇ ರಾಜ್ಯ ಸರ್ಕಾರ 34 ಮಂದಿ ಐ ಪಿ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದರಲ್ಲಿ ಆಡಳಿತ ವಿಭಾಗದ ಡಿಐಜಿಪಿ ಯಾಗಿದ್ದ ಐಪಿಎಸ್ ಅಧಿಕಾರಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿದ್ದ ಎಂ ಎನ್ ಅನುಚೇತ್ ಅವರ ಜಾಗಕ್ಕೆ ವರ್ಗಾವಣೆಗೊಂಡಿದ್ದರು.


