ವರದಿ: ವಿಕಿಲ ಎಸ್ ಹಿರೇಮಠ
ಕಾಗವಾಡ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ 1 ಲಕ್ಷ ಕ್ಯೂಸೇಕ್ ನೀರು ಬಿಡುಗಡೆಯಾಗಿದಕ್ಕೆ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ ಹಿನ್ನಲೆಯಲ್ಲಿ ಜಮಖಂಡಿ ಮಾರ್ಗ ಸಂಪರ್ಕಿಸುವ ಕುಡಚಿ- ಉಗಾರ ಸೇತುವೆ ರವಿವಾರ ಸಂಜೆ ಮುಳಗಡೆಯಾಗಿದೆ.

ಸೇತುವೆ ಮುಳಗಡೆ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕಾಡಳಿತ ಹಾಗೂ ಪೊಲೀಸ್ ಠಾಣೆಯವರು ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಷೇಧಿಸಿದ್ದಾರೆ.

ಇನ್ನು ಈ ಸೇತುವೆ ಮುಳಗಡೆಯಿಂದ ಪ್ರಯಾಣಿಕರಿಗೆ 60 ರಿಂದ 70 ಕಿಲೋ ಮೀಟರ್ ಸುತ್ತಾಗಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಯದಲ್ಲಿ ವಿಶೇಷ ಘಟಕ ಸಿಪಿಸಿ ಸುಭಾಷ ದೇವಋಷಿ, ಸಿಪಿಸಿ ರವಿ ಗಸ್ತಿ, 112 ಸಹಾಯವಾಣಿಯ ಎಪಿಸಿ ಅಪ್ಪು ಬಾಗಲಕೋಟ, ಸಿಪಿಸಿ ವಿಶಾಲ ಧರ್ಮಟ್ಟಿ, ಗ್ರಾಮಲೆಕ್ಕಾಧಿಕಾರಿ ಸುಕುಮಾರ ಕಲಾಜ, ಪುರಸಭೆ ಸಿಬ್ಬಂದಿ ರವಿ ಹಳ್ಳೂರ ಉಪಸ್ಥಿತರಿದ್ದರು.

